Leadership Training “Prerana”

ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಂಡಲ್ಲಿ ಯಶಸ್ಸು ಖಂಡಿತ

ನಂತೂರು ಆ.08 : ನಿರಂತರ ಅಧ್ಯಯನ,ಅಭ್ಯಾಸ ಮತ್ತು ಪ್ರಯತ್ನಗಳಿಂದ ವಿದ್ಯಾರ್ಥಿಗಳು ಉದ್ದೇಶಿಸಿದ ಗುರಿಯನ್ನು ತಲಪಬಹುದು. ಕಲಾ ವಿದ್ಯಾರ್ಥಿಗಳಿಗೂ ಇಂದು ಸಾಕಷ್ಟು ಶೈಕ್ಷಣಿಕ ಔದ್ಯೋಗಿಕ ಅವಕಾಶಗಳಿದ್ದು ಅವುಗಳನ್ನು ಯಶಸ್ವಿಯಾಗಿ ಬಳಸಿಕೊಂಡಲ್ಲಿ ಯಶಸ್ಸು ಖಂಡಿತ ಎಂದು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ “ಪ್ರೇರಣಾ”ದ ಮಾರ್ಗದರ್ಶಕ ಯು.ಎಸ್. ವಿಶ್ವೇಶ್ವರ ಭಟ್ ಹೇಳಿದರು.

ಅವರು ಬುಧವಾರ ಹಿರಿಯಡ್ಕ ದ ಸ.ಪ.ಪೂ.ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿಗಳಿಗೆ “ಪ್ರೇರಣಾ” ಮೂಲಕ ವಿಶೇಷ ಕಾರ್ಯಾಗಾರದಲ್ಲಿ ಸೇನೆಗಳಲ್ಲಿನ ಉದ್ಯೋಗಾವಕಾಶ, ವೃತ್ತಿ ಪರ, ಸ್ವೋದ್ಯೋಗಾವಕಾಶ, ಐಎಎಸ್ ಮುಂತಾದ ಕ್ಷೇತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಹತರಬೇತುದಾರ ವಾಣಿಜ್ಯ ಉಪನ್ಯಾಸಕ ಪ್ರವೀಣ್ ಸಹಕರಿಸಿದರು. ಪ್ರಾಂಶುಪಾಲ ಮಂಜುನಾಥ ಭಟ್ ಆಯೋಜಿಸಿದ್ದರು. ಪ್ರಭಾರ ಪ್ರಾಂಶುಪಾಲೆ ವೀಣಾ ನಾಯಕ್, ತರಗತಿ ಉಪನ್ಯಾಸಕ ಸಿದ್ಧೇಶ್ವರ ಉಪಸ್ಥಿತರಿದ್ದರು.

Highslide for Wordpress Plugin