JCI ಮಂಗಳೂರು ಶ್ರೇಷ್ಠ ಇವರಿಂದ ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಮಾಹಿತಿ ಶಿಬಿರ

ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ  JCI ಮಂಗಳೂರು ಶ್ರೇಷ್ಠ ಇವರಿಂದ ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಮಾಹಿತಿ ಶಿಬಿರ ನಡೆಯಿತು.

JCI ಮಂಗಳೂರು ಶ್ರೇಷ್ಠದ ರಾಷ್ಟ್ರೀಯ ತರಬೇತುದಾರರಾದ JC ರಾಜೇಶ್ವರಿ ಡಿ.ಶೆಟ್ಟಿ ಅವರು, ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಮುಂದಿನ ಗುರಿಯನ್ನು ನಿರ್ಧರಿಸುವುದು ಅಗತ್ಯ ಎಂದು ಪ್ರಾತ್ಯಕ್ಷಿಕೆಯ ಮೂಲಕ ವಿವಿಧ ಕೋರ್ಸುಗಳ ಬಗ್ಗೆ ವಿವರಣೆ ನೀಡಿದರು.

ಪ್ರಾಂಶುಪಾಲೆ ಗಂಗಾರತ್ನ ಹಾಗೂ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
JCI ಅಧ್ಯಕ್ಷ ದೀಪಕ್‌ರಾಜ್ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿ.ಎ ವಂದಿಸಿದರು.

Highslide for Wordpress Plugin