ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ

ದಿನಾಂಕ 19.08.2024 ರಂದು ಮಂಗಳೂರು ನಂತೂರಿನ ಶ್ರೀ ಭಾರತೀ  ಸಮೂಹ ಸಂಸ್ಥೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ಅತ್ಯಂತ ಸುಂದರವಾಗಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಗೋವುಗಳಿಗೆ ಪೂಜೆ ನೆರವೇರಿಸಿ ರಕ್ಷೆಯನ್ನು ಕಟ್ಟಲಾಯಿತು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಸೇವಾಸಮಿತಿಯ ಸದಸ್ಯರಾದ ಶ್ರೀ ರಮೇಶ್ ಭಟ್ ಸರವು ಅವರು ಮಾತನಾಡಿ ನಾವು ಗೋವನ್ನು ರಕ್ಷಣೆ ಮಾಡಿದಾಗ ಗೋಶಕ್ತಿ ನಮ್ಮನ್ನು ರಕ್ಷಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬೌದ್ಧಿಕ ನೀಡಿದ ಕದ್ರಿನಗರದ ಸಂಘ ಸಂಚಾಲಕರಾದ ಶ್ರೀ ರಮೇಶ್ ರಾವ್ ಅವರು  ಕುಟುಂಬದ ಸಂಸ್ಕಾರ,ಸ್ವದೇಶಿ ಚಿಂತನೆ,ಪರ್ಯಾವರಣ ರಕ್ಷಣೆ,ಸಾಮೂಹಿಕ ಶಿಷ್ಟಾಚಾರ ಹಾಗೂ ಸಮಾಜದಲ್ಲಿ ಸಾಮರಸ್ಯ- ಈ ಐದು ವಿಚಾರಗಳನ್ನು ನಾವು ಸದಾ ಅನುಸರಿಸಿ ದೇಶವನ್ನು ಗಟ್ಟಿಗೊಳಿಸಬೇಕು ಎಂದರು.

ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿ ಸಿಹಿತಿಂಡಿಯನ್ನು ಸವಿದು  ಸಾಮರಸ್ಯದ ಬಾಂಧವ್ಯವನ್ನು ಮೆರೆದರು.

ಈ ಸಮಾರಂಭದಲ್ಲಿ ಆರೋಗ್ಯ ಭಾರತೀ ಮಂಗಳೂರು ವಿಭಾಗದ ಸಹ ಸಂಯೋಜಕರಾದ ಶ್ರೀ ಪ್ರಶಾಂತ ಹೆಗಡೆ,ಸ್ವಯಂಸೇವಕರಾದ ಪರಶುರಾಮ್, ಸಂಸ್ಥೆಯ ನಿರ್ದೇಶಕರಾದ ಗಿರೀಶ್, ಪ್ರಾಂಶುಪಾಲರಾದ ಗಂಗಾರತ್ನ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶಿಕ್ಷಕರಾದ ಗಾಯತ್ರೀ ಶ್ರೀನಿವಾಸ್ ಸ್ವಾಗತಿಸಿ ಶೋಭಾ ಸಂತೋಷ್ ವಂದಿಸಿದರು.ಕಾರ್ತಿಕ ಕೃಷ್ಣ ನಿರೂಪಣೆ ಗೈದರು.

Highslide for Wordpress Plugin