ಶ್ರೀ ಭಾರತೀ ಸಮೂಹ ಸಂಸ್ಥೆಯ ಬೋಧಕ ವೃಂದದವರಿಗೆ “ಪರಿಣಾಮಕಾರಿ ಭಾಷಣ ಕಲೆ– ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಶಿಕ್ಷಕರಿಗೆ ತರಬೇತಿ “

ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯ ಬೋಧಕ ವೃಂದದವರಿಗೆ  ದಿನಾಂಕ 12-8-2023 ರಂದು “ಪರಿಣಾಮಕಾರಿ ಭಾಷಣ ಕಲೆ– ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಶಿಕ್ಷಕರಿಗೆ ತರಬೇತಿ ” (Public speaking -Teachers training- to train the students) ವಿಶೇಷ ತರಬೇತಿ ಕಾರ್ಯಾಗಾರ ನಡೆಯಿತು.

ಈ ಕಾರ್ಯಾಗಾರದಲ್ಲಿ ರಾಷ್ಟೀಯ ತರಬೇತುದಾರರು, ನಮ್ಮ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರು,ನಿವೃತ್ತ ಪ್ರಾಂಶುಪಾಲರು ಹಾಗೂ ‘ವಿದ್ಯಾನಂದ’ದ ತರಬೇತಿ ಸಂಯೋಜಕರಾಗಿರುವ ಪ್ರೊ.ವಿಶ್ವೇಶ್ವರ ಭಟ್ ಅವರು ತರಬೇತಿ ನೀಡಿದರು.

ಕಾರ್ಯಾಗಾರವು ಗುರುವಂದನೆಯೊಂದಿಗೆ ಆರಂಭಗೊಂಡಿತು.

ತರಬೇತಿಯ ಮೊದಲ ಹೆಜ್ಜೆಯಾಗಿ “ಎದುರಿಸುವ ಕಲೆ” (Face it- Activity) ಚಟುವಟಿಕೆ ನಡೆಯಿತು.
ಕಾರ್ಯಕ್ರಮದ ನಿರೂಪಣೆ,ಸ್ವಾಗತ,ಪ್ರಾಸ್ತಾವಿಕ ಮಾತು,ಉದ್ಘಾಟನಾ ಭಾಷಣ,ಅತಿಥಿಗಳ ಭಾಷಣ ,ಧನ್ಯವಾದ – ಇತ್ಯಾದಿ ಕಾರ್ಯಕ್ರಮದ ವಿವಿಧ ಹಂತಗಳನ್ನು ಶಿಕ್ಷಕರು ನಿರ್ವಹಿಸಿದರು.
ವೇದಿಕೆಗೆ ಬಂದ ಶಿಕ್ಷಣಾರ್ಥಿಗಳನ್ನು ಇತರ ಶಿಕ್ಷಣಾರ್ಥಿಗಳು ಪ್ರಶ್ನಿಸಿದರು.

ಮುಂದೆ ಪ್ರತಿಯೊಬ್ಬರೂ ಚಟುವಟಿಕೆಗಳಲ್ಲಿ ತಾವು ಗಮನಿಸಿದ ಸರಿ – ತಪ್ಪುಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಈ ತರಬೇತಿ ಕಾರ್ಯಾಗಾರವು ಶಾಂತಿ ಮಂತ್ರದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

August 25 ಮತ್ತು 28 ರಂದು ನಡೆಯಲಿರುವ ತರಬೇತಿಯಲ್ಲಿ ಉಳಿದ ಚಟುವಟಿಕೆಗಳು ನಡೆಯಲಿವೆ.

Highslide for Wordpress Plugin