ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ 75 ಸಾವಿರ ಕೋಟಿ ಸೂರ್ಯ ನಮಸ್ಕಾರ ಯೋಗಯಜ್ಜ್ಞ ಕಾರ್ಯಕ್ರಮ ನಡೆಯಿತು

75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಪ್ರಯುಕ್ತ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ 75 ಸಾವಿರ ಕೋಟಿ ಸೂರ್ಯ ನಮಸ್ಕಾರ ಯೋಗಯಜ್ಜ್ಞ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಬಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಜನವರಿ 27ರಿಂದ ಫೆಭ್ರವರಿ 5ರವರೆಗೆ ಶ್ರೀ ಪತಂಜಲಿ ಯೋಗ ಸೇವಾ ಸಂಘದ ಸಹಕಾರದೊಂದಿಗೆ ಸಕ್ರಿಯವಾಗಿ ಭಾಗವಹಿಸಿದರು, ಫೆಬ್ರವರಿ 7ರಂದು ರಥಸಪ್ತಮಿ ದಿನದಂದು ಈ ಕಾರ್ಯಕ್ರಮವು ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಕುಡ್ಲ ಇದರ ಅಧ್ಯಕ್ಷರಾದ ಲಯನ್ ಶ್ರೀಧರ್ ಶೆಟ್ಟಿ ಹಾಗೂ ಹರೀಶ್ ಅಥಿತಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಪದವೀಪೂರ್ವಕಾಲೇಜಿನ ಪ್ರಾಂಶುಪಾಲರಾದ ಗಂಗಾರತ್ನ, ಸ್ವಾಮೀ ಸದಾನಂದ ಸರಸ್ವತೀ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಶ್ರೀಮತಿ ದುರ್ಗಾವತಿ ಮತ್ತು ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಯೋಗ ತರಬೇತುದಾರರಾದ ಶ್ರೀ ಶಿವಕುಮಾರ್, ಶ್ರೀ ಉಮೇಶ್ ಮತ್ತು ಶ್ರೀಮತಿ ಗೀತಾ ಇವರು ಉಪಸ್ಥಿತರಿದ್ದರು. ಶಿಕ್ಷಕಿ ಗಾಯತ್ರಿ ರಥಸಪ್ತಮಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಿಕ್ಷಕಿ ಪ್ರತಿಭಾ ಅತಿಥಿಗಳನ್ನು ಸ್ವಾಗತಿಸಿ, ಶಿಕ್ಷಕಿ ನಿಖಿತಾ ಧನ್ಯವಾದ ಸಮರ್ಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಯೋಗ ಶಿಕ್ಷಕರಾದ ಪ್ರತಿಮ್ ಕುಮಾರ್ ಕಾರ್ಯಕ್ರಮ ಸಂಘಟಿಸಿದರು

Highslide for Wordpress Plugin