ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗುರುಪೂರ್ಣಿಮೆ ಆಚರಣೆ

ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ  ಗುರುಪೂರ್ಣಿಮೆ ಆಚರಣೆ ನಡೆಯಿತು.

ಈ ಸಮಾರಂಭದಲ್ಲಿ ಸಂಸ್ಥೆಯ ಸೇವಾ ಸಮಿತಿಯ ಸದಸ್ಯರು ಹಾಗೂ ಮಂಗಳೂರು ಹವ್ಯಕ ಮಂಡಲದ ಕಾರ್ಯದರ್ಶಿಗಳಾದ ಶ್ರೀ ರಮೇಶ್ ಭಟ್ ಸರವು ಅವರು ಮುಖ್ಯ ಅತಿಥಿಗಳಾಗಿ

ಭಾಗವಹಿಸಿದ್ದರು.

ಅವರು ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಾ, ವ್ಯಾಸರಂತಹ ಶ್ರೇಷ್ಠ ಗುರುಗಳನ್ನು ಹೊಂದಿದ ನಮ್ಮ ಗುರು ಪರಂಪರೆ ಬಹಳ ದೊಡ್ಡದು.ಗುರುವಿನ ಮಾರ್ಗದರ್ಶನದಿಂದ ಬದುಕು ಸಾರ್ಥಕವೆನಿಸುತ್ತದೆ ಎಂದರು.

ಪ್ರಾಂಶುಪಾಲೆ ಗಂಗಾರತ್ನ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಪರಿಚಯಿಸಿದರು.

ಉಪನ್ಯಾಸಕಿ ವೀಣಾ ಕಾರ್ಯಕ್ರಮ ನಿರೂಪಣೆ ಗೈದರು.

Highslide for Wordpress Plugin