ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಇಂದು ಗಾಂಧೀಜಿಯವರ ಜನ್ಮದಿನಾಚರಣೆಯ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 02.10.2023ರಂದು ಗಾಂಧೀಜಿಯವರ ಜನ್ಮದಿನಾಚರಣೆಯ ಪ್ರಯುಕ್ತ  ಯುವವಾಹಿನಿ (ರಿ)ಕೂಳೂರು ಘಟಕದ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

ಈ ಅಭಿಯಾನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯಾಲಯ ಕಾರ್ಯದರ್ಶಿಯಾದ  ಶ್ರೀ ಎಂ.ಟಿ ಭಟ್ ಅವರು ವಹಿಸಿದ್ದರು.ಅವರು ಮಾತನಾಡುತ್ತಾ ಸ್ವಾಮಿ ಸದಾನಂದ ಸರಸ್ವತಿಯವರ ಪುಣ್ಯಭೂಮಿ,ಶ್ರೀಧರ ಸ್ವಾಮೀಜಿಯವರ ತಪೋಭೂಮಿ,ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕೃಪೆಯಿಂದ ನಡೆಯುತ್ತಿರುವ ವಿದ್ಯಾಸಂಸ್ಥೆ ನೆಲೆಗೊಂಡಿರುವ ಇಲ್ಲಿ ಪ್ರಾಮಾಣಿಕವಾದ  ಸ್ವಚ್ಛತಾ ಅಭಿಯಾನ ನಡೆಯುತ್ತಿರುವುದು ಅಭಿನಂದನೀಯ ಎಂದರು.

ಉದ್ಘಾಟಕರಾಗಿ ಭಾಗವಹಿಸಿದ ಘಟಕದ ದ್ವಿತೀಯ ಉಪಾಧ್ಯಕ್ಷ  ಶ್ರೀ ಲೋಕೇಶ್ ‌ಕೋಟ್ಯಾನ್ ಅವರು ವಿದ್ಯಾರ್ಥಿಗಳು ಸ್ವಚ್ಛತೆಯ ಮಹತ್ವವನ್ನು ಇತರರಿಗೂ ತಿಳಿಸಬೇಕು ಎಂದರು.

ಘಟಕದ ನಿಕಟ ಪೂರ್ವ ಅಧ್ಯಕ್ಷ ಶ್ರೀ ದೀಕ್ಷಿತ್ ಅವರು ಸಂಸ್ಥೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದು ಸುಯೋಗ ಎಂದರು. ಪ್ರಾಂಶುಪಾಲರಾದ ಗಂಗಾರತ್ನ ಶುಭ ಹಾರೈಸಿದರು.

ಯುವವಾಹಿನಿ ಘಟಕದ ಕಾರ್ಯದರ್ಶಿ ಶ್ರೀಮತಿ ಸುಮಂಗಲ ಮತ್ತು ಸದಸ್ಯರು ಜೊತೆಗೆ ಸಂಸ್ಥೆಯ ಶಿಕ್ಷಕ- ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ  ಹಾಜರಿದ್ದರು.

ಶಿಕ್ಷಕಿಯರಾದ ಗಾಯತ್ರಿ ಶ್ರೀನಿವಾಸ್ ಸ್ವಾಗತಿಸಿ ವೀಣಾ ವಂದಿಸಿದರು.ಕಾರ್ತಿಕ್‌ ಕೃಷ್ಣ ನಿರೂಪಣೆ ಗೈದರು.

Highslide for Wordpress Plugin