ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಭರತನಾಟ್ಯ ತರಗತಿ ಆರಂಭ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಭರತನಾಟ್ಯ ತರಗತಿ ಆರಂಭ

ನಂತೂರು, ಜ.25 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ, ನಾಟ್ಯನಿಕೇತನ ಕೊಲ್ಯ ಇದರ ನಿರ್ದೇಶಕಿ, ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಅವರಿಂದ ಭರತನಾಟ್ಯ ತರಗತಿ ಆರಂಭಗೊಂಡಿತು.

ನಂತೂರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪಿಯುಸಿ ಪ್ರಾಂಶುಪಾಲರಾದ ಗಂಗಾರತ್ನ ಅವರು ದೀಪ ಪ್ರಜ್ವಲಿಸಿದರು. ಗಣಪತಿಗೆ ಮತ್ತು ನಟರಾಜನಿಗೆ ಪೂಜೆ ಸಲ್ಲಿಸಿ ಕು.ಪೂಜಾಳಿಗೆ ವಿದುಷಿ ರಾಜಶ್ರೀಯವರು ಭರತನಾಟ್ಯದ ಹೆಜ್ಜೆಗಳನ್ನು ಕಲಿಸಿದರು. ಅವರ ಶಿಷ್ಯೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Highslide for Wordpress Plugin