ಶ್ರೀ ಭಾರತೀ ಸಮೂಹ ಸಂಸ್ಥೆಗಳು : ರಥಸಪ್ತಮಿ ಸೂರ್ಯನಮಸ್ಕಾರ ಯೋಗ ಯಜ್ಞಾ ಕಾರ್ಯಕ್ರಮ‌

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ರಥಸಪ್ತಮಿ ಸೂರ್ಯನಮಸ್ಕಾರ ಯೋಗ ಯಜ್ಞಾ ಕಾರ್ಯಕ್ರಮ‌

ನಂತೂರು, ಜ.30 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ, ಸ್ವಾಮಿ ಸದಾನಂದ ಸರಸ್ವತಿ ಶಾಲೆ ಹಾಗೂ ಕ್ರೀಡಾಭಾರತಿಯವರ ಸಂಯೋಜನೆಯಲ್ಲಿ ರಥಸಪ್ತಮಿ ಸೂರ್ಯನಮಸ್ಕಾರ ಯೋಗ ಯಜ್ಞಾ ಕಾರ್ಯಕ್ರಮ‌ ಜನವರಿ 28ರಂದು ನಡೆಯಿತು.

ಮಹಾನಗರ ಸಂಘ ಕಾರ್ಯಕರ್ತ ಹರ್ಷವರ್ಧನ್ ಕಾರ್ಯಕ್ರಮದ ಮಹತ್ವ ತಿಳಿಸಿದರು.

ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಗಂಗಾರತ್ನ ಮತ್ತು ದುರ್ಗಾದೇವಿ ಹಾಗೂ ಮತ್ತು ಶಿಕ್ಷಕ ರಕ್ಷಕ ಸಂಘದ ಸಂಘಟನ ಕಾರ್ಯದರ್ಶಿ ಜನಾರ್ದನ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕ ಜಯಪ್ರಕಾಶ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರತಿಮ್ ಕುಮಾರ್ ವಂದಿಸಿದರು.

Highslide for Wordpress Plugin