ಶ್ರೀ ಭಾರತೀ ಕಾಲೇಜಿನಲ್ಲಿ ರಕ್ಷಾಬಂಧನ ಆಚರಣೆ

ಮಂಗಳೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ದಿನಾಂಕ ೦7.೦8.2೦17 ರಂದು ಬೆಳಿಗ್ಗೆ ’ರಕ್ಷಾಬಂಧನ’ ಆಚರಣೆ ನೆರವೇರಿತು. ಈ ಸಮಾರಂಭದಲ್ಲಿ ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಂಗಳೂರು ಮಹಾನಗರ ಸಹ ಬೌದ್ಧಿಕ್ ಪ್ರಮುಖ್ ಆಗಿರುವ ವಕೀಲರಾದ ಶ್ರೀ ಸತೀಶ್‌ಕುಮಾರ್ ಅವರು ಮಾತನಾಡಿ, ರಕ್ಷಾಬಂಧನವು ನಮ್ಮಲ್ಲಿ ಸಹೋದರ ಬಾಂಧವ್ಯವನ್ನು ಗಟ್ಟಿಗೊಳಿಸುವುದರೊಂದಿಗೆ ದೇಶಪ್ರೇಮವನ್ನು ಜಾಗೃತಗೊಳಿಸುತ್ತದೆ ಎಂದರು. ಈ ಸಮಾರಂಭದಲ್ಲಿ ಕದ್ರಿ ಪ್ರತಾಪ್‌ನಗರ ಕಾರ್ಯವಾಹ ಶ್ರೀ ಮೇಘಶ್ಯಾಮ್, ಕದ್ರಿ ನಗರ ಕಾರ್ಯವಾಹ ಶ್ರೀ ಕೃಷ್ಣಮೂರ್ತಿ, ಸಹಕಾರ್ಯವಾಹ ಶ್ರೀ ಯತೀಶ್, ಶಾರೀರಿಕ್ ಪ್ರಮುಖ್ ಶ್ರೀ ಶ್ರವಣ್ ಕುಮಾರ್ ಮತ್ತು ವಸತಿ ಕಾರ್ಯವಾಹ ಶ್ರೀ ಸುಭಾಷ್ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಈಶ್ವರಪ್ರಸಾದ್ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Highslide for Wordpress Plugin