ಶಾರದಾ ಪೂಜಾ ಆಚರಣೆ 2018-19

ಶಾರದಾ ಪೂಜಾ ಆಚರಣೆ 2018-19

ದಿನಾಂಕ 15.10.2018 ರಂದು ನಂತೂರು ಪದವಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶಾರದಾಪೂಜೆಯನ್ನು ಆಚರಿಸಲಾಯಿತು. ಕಾರ್ಯಾಲಯ ಕಾರ್ಯಾಧ್ಯಕ್ಷರಾದ ಶ್ರೀ ಎಂ.ಟಿ.ಭಟ್ ಅವರು ದೀಪವನ್ನು ಬೆಳಗುವುದರೊಂದಿಗೆ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ಆರಂಭವಾಯಿತು. ವಿಘ್ನವಿನಾಶಕನಾದ ಗಣಪತಿಯ ಸ್ತುತಿಯೊಂದಿಗೆ ಕುಣಿತ ಭಜನೆಯನ್ನು ನಡೆಸಿದ ವಿದ್ಯಾರ್ಥಿಗಳು ಎಲ್ಲರಲ್ಲೂ ಭಕ್ತಿ-ಭಾವವನ್ನು ತುಂಬಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಎಂ.ಟಿ.ಭಟ್ ಅವರು, ಭಜನೆಯು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸಿ, ಕ್ರಿಯಾಶೀಲರನ್ನಾಗಿಸುತ್ತದೆ. ವಿದ್ಯಾದೇವತೆಯಾದ ಶಾರದೆಯು ವಿದ್ಯಾರ್ಥಿಗಳಿಗೆ ಯಶಸ್ಸನ್ನು ಕರುಣಿಸಲಿ ಎಂದು ಹಾರೈಸಿದರು. ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ.ಈಶ್ವರಪ್ರಸಾದ್ ಅವರು ದೇವಿಯ ಸ್ತೋತ್ರಗಳನ್ನು ಪಠಿಸುವುದರ ಜೊತೆಗೆ, ಭಗವದ್ಗೀತಾ ವಾಚನ ಮಾಡಿದರು. ಈ ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಿನಯ್ ಭಾರದ್ವಾಜ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್ ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಕಾರ‍್ಯದರ್ಶಿ ಕಾರ್ತಿಕ್ ಆರ್. ಪದ್ಮಶಾಲಿ ಹಾಗೂ ಹಳೆ ವಿದ್ಯಾರ್ಥಿಗಳಾದ ಮಧುಸೂದನ್, ಮನೀಶ್, ಪ್ರಾಣೇಶ್ ಮತ್ತು ಶರತ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Highslide for Wordpress Plugin