ಮಹಿಳಾ ಸಬಲೀಕರಣ ಘಟಕದ ಕಾರ್ಯಕ್ರಮ

ನಂತೂರು, ಮಾ.1೦ : ದಿನಾಂಕ ೦9.೦3.2೦18ರಂದು ಶ್ರೀ ಭಾರತೀ ಕಾಲೇಜಿನಲ್ಲಿ ಮಹಿಳಾ ಸಬಲೀಕರಣದ ಕುರಿತು ಕೆ.ವಿ.ಜಿ. ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪಾರ್ವತಿ ಎಂ. ಅವರು ಮಾತನಾಡಿದರು. ವಿದ್ಯಾರ್ಥಿನಿಯರು ಹೇಗೆ ನೈತಿಕ ಮೌಲ್ಯಗಳನ್ನು ಉನ್ನತೀಕರಿಸಬೇಕು ಮತ್ತು ಅದಕ್ಕಾಗಿ ಅನುಸರಿಸಬೇಕಾದ ವಿದ್ಯಾರ್ಥಿಗಳ ಕುರಿತು ಮಾಹಿತಿಗಳನ್ನು ನೀಡಿದರು. ಶೀಘ್ರ ಬೆಳವಣಿಗೆಯುಳ್ಳ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರ ಪಾತ್ರ ಎಷ್ಟು ಮಹತ್ವಪೂರ್ಣವಾದುದು ಎಂಬುದರ ಕುರಿತು ವಿದ್ಯಾರ್ಥಿನಿಯರಲ್ಲಿ ಅರಿವನ್ನು ಮೂಡಿಸಿದರು. ಮಹಿಳಾ ಸಬಲೀಕರಣ ಘಟಕದ ಪ್ರತಿನಿಧಿ ಸುಶ್ಮಿತಾ ಸ್ವಾಗತಿಸಿ, ಸಂಧ್ಯಾ ವಂದನಾರ್ಪಣೆ ಗೈದರು.

Highslide for Wordpress Plugin