ಭಾರತ ದರ್ಶನ ಮಾಡಲಿರುವ ಶ್ರೀ ಉನ್ನಿಕೃಷ್ಣನ್ ಅವರಿಗೆ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸ್ವಾಗತ

ಕನ್ಯಾಕುಮಾರಿಯಿಂದ ಕಾಲ್ನಡಿಗೆ ಆರಂಭಿಸಿ, ಭಾರತ ದರ್ಶನ ಮಾಡಲಿರುವ ಶ್ರೀ ಉನ್ನಿಕೃಷ್ಣನ್ ಅವರಿಗೆ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸ್ವಾಗತ

ನಂತೂರು, ಫೆ.22 : ಕೇರಳದ ತ್ರಿಶೂರಿನ ಉನ್ನಿಕೃಷ್ಣನ್ ಇವರು ಶೃಂಗೇರಿ, ದ್ವಾರಕ, ಬದರಿ ಮತ್ತು ಪುರಿ ಕ್ಷೇತ್ರಗಳನ್ನು ಸಂದರ್ಶಿಸುವ ಮತ್ತು ಭಾರತ ದರ್ಶನ ಮಾಡುವುದಕ್ಕಾಗಿ, ಜನವರಿ ಒಂದರಂದು ಕನ್ಯಾಕುಮಾರಿಯಲ್ಲಿ ಕಾಲ್ನಡಿಗೆ ಪ್ರಾರಂಭಿಸಿದರು. ಜನರಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಣುವ ದೃಷ್ಟಿಯಿಂದ ಅವರು ಪ್ರವಾಸ ಮಾಡುತ್ತಿದ್ದಾರೆ. ದಿನಾಂಕ 21-02-2022ರಂದು ಮಂಗಳೂರಿಗೆ ಬರುವ ದಾರಿಯಲ್ಲಿ ಅವರನ್ನು ನಂತೂರು ಶ್ರೀ ಭಾರತಿ ಸಮೂಹ ಸಂಸ್ಥೆಯ ರೋವರ್ಸ್ ವಿದ್ಯಾರ್ಥಿಗಳಾದ ಗುರುಕಿರಣ್, ಮೋಹಿತ್, ಅಕ್ಷತ್ ಹಾಗೂ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀ ಪ್ರತೀಮ್ ಕುಮಾರ್ ಅವರು ಸ್ವಾಗತಿಸಿದರು. ಅವರ ಆಶೀರ್ವಾದವನ್ನು ಪಡೆದು ಅನಂತರ ಅವರನ್ನು ಮೂಡಬಿದ್ರೆ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ನಡೆಯುತ್ತ ಸಾಗಿ ಬೀಳ್ಕೊಟ್ಟರು.

Highslide for Wordpress Plugin