ಪ್ರೇರಣಾ – 2018

          ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ನೇತೃತ್ವದಲ್ಲಿ ಉಂಡೆಮನೆ ದಿ.ಶಂಭು ಶರ್ಮ ಪ್ರತಿಷ್ಠಾನದ ವತಿಯಿಂದ ಮಂಗಳೂರು ಸರಕಾರಿ ಪ್ರೌಢ ಶಾಲೆ  ಮುಲ್ಲಕಾಡು, ಕಾವೂರಿನಲ್ಲಿ  ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ತರಬೇತಿ ಏರ್ಪಡಿಸಲಾಯಿತು.
ಶಿಕ್ಷಣ ಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಅವರು ತರಬೇತಿ ನೀಡಿದರು. ಕೋಆರ್ಡಿನೇಟರ್ ಅನಂತನಾರಾಯಣ ಪದಕಣ್ಣಾಯ ಸಹಕರಿಸಿದರು.
ಕಾರ್ಯಗಾರದಲ್ಲಿ ಮಕ್ಕಳಿಗೆ ಪರಿಕ್ಷಾ ಸಿದ್ದತೆ,ಕಲಿಕೆಯ ವಿಧಾನ ಮತ್ತು ೧೦ರ ನಂತರ ಮುಂದೇನು ಎಂಬ ಬಗ್ಗೆ ಮಾಹಿತಿಯನ್ನು ನೀಡಿದರು.ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತೀ ಧನಲಕ್ಶ್ಮಿ ಸ್ವಾಗತಿಸಿದರು. ಮತ್ತು ಪ್ರಾಧ್ಯಾಪಕಿ  ಶ್ರೀಮತೀ ಕೃಪ ವಂದಿಸಿದರು.

Highslide for Wordpress Plugin