ಪ್ರೇರಣಾ – 2018

ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ಕಾರ್ಯಾಗಾರ

       ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ನೇತೃತ್ವದಲ್ಲಿ ಉಂಡೆಮನೆ ದಿ.ಶಂಭು ಶರ್ಮ ಪ್ರತಿಷ್ಠಾನದ ವತಿಯಿಂದ ಮಂಗಳೂರು ಬಿಇಎಂ ಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ತರಬೇತಿ ಏರ್ಪಡಿಸಲಾಯಿತು.
ಶಿಕ್ಷಣ ಸಂಯೋಜಕ ಯು.ಎಸ್.ವಿಶ್ವೇಶ್ವರ ಭಟ್ ಅವರು ತರಬೇತಿ ನೀಡಿದರು. ಕೋಆರ್ಡಿನೇಟರ್ ಅನಂತನಾರಾಯಣ ಪದಕಣ್ಣಾಯ ಸಹಕರಿಸಿದರು.
ಇಂಟರ‍್ಯಾಕ್ಟ್ ಕ್ಲಬ್ ಸದಸ್ಯ ವಿಟ್ಠಲ್ ಕುಡ್ವ, ಸುರೇಶ್ ಕಿಣಿ, ಆಡಳಿತ ಮಂಡಳಿ ಸಂಚಾಲಕ ರೋಹನ್ ಶಿರಿ, ಖಜಾಂಜಿ ಆಲ್ವಿನ್, ಆನಂದ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಫ್ಯುದ್ದೀನ್, ಮುಖ್ಯ ಶಿಕ್ಷಕ ಶಂಕರ್ ಕೆ.ಸಿ. ಉಪಸ್ಥಿತರಿದ್ದರು.

Highslide for Wordpress Plugin