ಪ್ರೇರಣಾ – 2018

 ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ , ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ಕಾರ್ಯಾಗಾರ

 

        ಧನಾತ್ಮಕ ಕಾರ್ಯಗಳಿಂದ ಪರೀಕ್ಶೆಯ ಕುರಿತಂತಿರುವ ಹೆದರಿಕೆ ಹೋಗಿ ಆತ್ಮವಿಶ್ವಾಸ ಹೆಚ್ಚಿಸಿ  ಗೆಲ್ಲಬಹುದು ಯೆಂದು ಉಪನ್ಯಾಸಕ ಅನಂತನಾರಾಯಣ ಪದಕಣ್ಣಾಯ  ಭಜಪೆಯ ನಿರಂಜನ ಸ್ವಾಮಿ ಪದವಿ  ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಗೆ ಸಲಹೆ   ನೀಡಿದರು.

       ಶ್ರೀ ಭಾರತೀ ಸಮೂಹ ಸಂಸ್ಥೆಗಳು,ಮಂಗಳೂರು ಇದರ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ “ಪ್ರೇರಣಾ”ವತಿಯಿಂದ ಇಲ್ಲಿನ ವಿಧ್ಯಾರ್ಥಿಗಳಿಗೆ ಏರ್ಪಡಿಸಿದ್ದ “ಪರೀಕ್ಷೆಗಳಲ್ಲಿ ಧನಾತ್ಮಕ ಉತ್ತರಿಸುವಿಕೆ” ತರಬೇತಿಯಲ್ಲಿ ಭಾಗವಹಿಸಿ  ಮಾತನಾಡಿದ ಅವರು  ಆತ್ಮವಿಶ್ವಾಸವನ್ನು ಹೆಚ್ಚಿಸುವ ಚಟುವಟಿಕೆಗಳನ್ನು  ನಡೆಸಿಕೊಟ್ಟರು. ಉಪನ್ಯಾಸಕ ಸತ್ಯನಾರಾಯಣ  ಪ್ರಸಾದ್ ಕೆ ಸಹಕರಿಸಿದರು. ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವ್ಶೈಶಾಲಿ ಸಿವಂದಿಸಿದರು.

Highslide for Wordpress Plugin