ಪರಿಣಾಮಕಾರಿ ಭಾಷಣ ಕಲೆ ಬಗ್ಗೆ ಜೇಸಿಐ ಶ್ರೇಷ್ಠ ವತಿಯಿಂದ ತರಬೇತಿ

ನಂತೂರು, ನ.28 : ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಜೆಸಿಐ ಮಂಗಳೂರು ಶ್ರೇಷ್ಠ ಇವರಿಂದ ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

ಜೆಸಿಐ ಅಧ್ಯಕ್ಷ ಜೆ ಎಫ್ ಡಿ ರವಿಚಂದ್ರ ಪಾಠಾಳಿ ಮಾತನಾಡಿ ಶ್ರೀ ಭಾರತೀ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ನಮ್ಮ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡಿದ್ದಾರೆ ಎಂದರು.

ನಿಕಟಪೂರ್ವ ಅಧ್ಯಕ್ಷರಾದ ಲತಾ ಡಿ.ಸುವರ್ಣ ಅವರು, ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಇನ್ನು ಮುಂದೆಯೂ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದರು.

ತರಬೇತುದಾರರಾದ ಅಕ್ಷತಾ ಶೆಟ್ಟಿ ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ತಿಳಿಸುವುದರೊಂದಿಗೆ ವಿದ್ಯಾರ್ಥಿಗಳಿಂದ ಪ್ರಾಯೋಗಿಕವಾಗಿ ಭಾಷಣವನ್ನು ಮಾಡಿಸಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ಭಾರತೀ ಪಪೂ ಕಾಲೇಜು ಪ್ರಾಂಶುಪಾಲರಾದ ಗಂಗಾರತ್ನ, ಸಂಸ್ಥೆಯ ಶಿಕ್ಷಕರು, ಪದವಿ, ಪದವಿಪೂರ್ವ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡರು.

Highslide for Wordpress Plugin