ದೈಹಿಕ ಶಿಕ್ಷಣ ಶಿಕ್ಷಕರೂ, ಕರ್ನಾಟಕ ರಾಜ್ಯರತ್ನ ಪ್ರಶಸ್ತಿ ವಿಜೇತರೂ ಅದ ಶ್ರೀ ಪ್ರತಿಮ್‌ ಕುಮಾರ್ ಎಸ್. ಅವರಿಗೆ ಜೆಸಿಐ ಶ್ರೇಷ್ಠದ ವತಿಯಿಂದ ಸನ್ಮಾನ ಕಾರ್ಯಕ್ರಮ

ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರೂ, ಕರ್ನಾಟಕ ರಾಜ್ಯರತ್ನ ಪ್ರಶಸ್ತಿ ವಿಜೇತರೂ ಅದ ಶ್ರೀ ಪ್ರತಿಮ್‌ ಕುಮಾರ್ ಎಸ್. ಅವರಿಗೆ ಜೆಸಿಐ ಶ್ರೇಷ್ಠದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಜೆಸಿಐ ಶ್ರೇಷ್ಠದ ಅಧ್ಯಕ್ಷ ಜೆಎಫ್‌ಡಿ ರವಿಚಂದ್ರ ಪಾಠಾಳಿ ಅವರು ಸಮ್ಮಾನಿಸಿ, ಮಾತನಾಡಿ,

ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಇವರು ನೀಡಿದ ಸೇವೆ ಸ್ತುತ್ಯರ್ಹ ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷರಾದ ಲತಾ.ಡಿ ಸುವರ್ಣ ಅವರು ಮಾತನಾಡಿ ಶ್ರೀ ಪ್ರತಿಮ್‌ ಕುಮಾರ್ ಎಸ್. ಅವರು ಸ್ಕೌಟ್ಸ್ ಗೈಡ್ಸ್ ರೋವರ್ ರೇಂಜರ್ಸ್ ವಿಭಾಗಗಳಲ್ಲಿಯೂ ಕ್ರಿಯಾಶೀಲ ಚಟುವಟಿಕೆ ನಡೆಸುತ್ತಿದ್ದು ಸದಾ ಅಭಿನಂದನೀಯರು ಎಂದರು.

ತರಬೇತುದಾರರಾದ ಅಕ್ಷತಾ ಶೆಟ್ಟಿ, ಜೇಸಿಐ ಸದಸ್ಯರು, ಶ್ರೀ ಭಾರತೀ ಪಿಯು ಕಾಲೇಜು ಪ್ರಾಂಶುಪಾಲರಾದ ಗಂಗಾರತ್ನ ಉಪಸ್ಥಿತರಿದ್ದರು.

Highslide for Wordpress Plugin