ಗುರುಪೂರ್ಣಿಮೆ ಆಚರಣೆ 2018-19

ಗುರುಪೂರ್ಣಿಮೆ ಆಚರಣೆ 2018-19

ನಂತೂರು, ಜು.27 : ಮಂಗಳೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶುಕ್ರವಾರ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಿವಾಣ ಕೇಶವ ಭಟ್ ಅವರು ಗುರುಪೂರ್ಣಿಮೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ, ವ್ಯಾಸರು ನಮ್ಮ ಮಹಾಗುರುಗಳು. ಸನಾತನ ಧರ್ಮದ ಎಲ್ಲಾ ಮಾಹಿತಿಗಳು ವ್ಯಾಸರಿಂದ ಬೆಳಕಿಗೆ ಬಂದಿದೆ. ಗುರುವಿನ ಅನುಗ್ರಹವಿದ್ದರೆ, ನಾವು ಅಂಧಕಾರದಿಂದ, ಅಜ್ಞಾನದಿಂದ ವಿಮುಕ್ತರಾಗುತ್ತೇವೆ. ವಿದ್ಯೆಯ ಜೊತೆಗೆ ವಿನಯವೂ ಇರಬೇಕು ಎಂದರು.

ಇದೇ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಯೋಜನೆ, ಉದ್ದೇಶಗಳನ್ನು ಪ್ರಸ್ತಾಪಿಸಲಾಯಿತು. ಪೂಜ್ಯ ಶ್ರೀ ಶ್ರೀಧರ ಸ್ವಾಮಿಗಳ ಸನ್ನಿಽಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಂದ ಭಜನೆ, ಗುರುಪೂಜೆಯ ಅನಂತರ ಪ್ರಸಾದ ವಿತರಣೆ ನಡೆಯಿತು. ಶ್ರೀ ಭಾರತೀ ಸಮೂಹ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.

 

 

 

Highslide for Wordpress Plugin