ಗಣರಾಜ್ಯೋತ್ಸವ ಕಾರ್ಯಕ್ರಮ – 2019

 *ರಾಷ್ಟ್ರದ ಏಳಿಗೆಗಾಗಿ ಶ್ರಮಿಸಿ ಭಾರತವನ್ನು ವಿಶ್ವದಲ್ಲಿ ಬೆಳಗುವಂತೆ ಮಾಡುವುದು ನಮ್ಮ ಕರ್ತವ್ಯ : ಶ್ರೀ ಶ್ಯಾಮಸುಂದರ ಭೀಮಗುಳಿ*

                ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಗಳು ಮತ್ತು ಸ್ವಾಮೀ ಸದಾನಂದ ಸರಸ್ವತೀ ವಿದ್ಯಾಲಯ ಹಮ್ಮಿಕೊಂಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದ ಪಣಂಬೂರು ಕೆ.ಐ.ಒ.ಸಿ.ಎಲ್.ನ ಎಂ.ಎಂ.ವಿಭಾಗದ ನಿವೃತ್ತ ಮ್ಯಾನೇಜರ್ ಶ್ರೀ ಶ್ಯಾಮಸುಂದರ ಭೀಮಗುಳಿ ಇವರು ಮಾತನಾಡಿ, ಸಂವಿಧಾನದ ಆಶಯಗಳಿಗನುಗುಣವಾಗಿ ಬಡತನ, ನಿರುದ್ಯೋಗ, ಜಾತಿವಾದ ಭ್ರಷ್ಟಾಚಾರಗಳನ್ನು ನಿವಾರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜನರಿಂದ ಜನರಿಗೆ ಜನರಿಗೋಸ್ಕರ ಸಂವಿಧಾನದಲ್ಲಿ ಇರುವಂತಹ ಆದರ್ಶಗಳನ್ನು ನಾವು ಪ್ರತಿಪಾದಿಸಬೇಕು ಎಂದರು.

ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಉಪಸ್ಥಿತರಿದ್ದರು.

       ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ ಈಶ್ವರ ಪ್ರಸಾದ ಸ್ವಾಗತಿಸಿದರು. ಹಾಗೂ ಸ್ವಾಮೀ ಸದಾನಂದ ಸರಸ್ವತೀ ವಿದ್ಯಾಲಯದ ಮುಖ್ಯೋಪಾಧ್ಯಾಯ ಗುರುರಾಜ ಭಟ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಭಾರತೀ ಪದವಿ-ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್, ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮತ್ತು ಸ್ವಾಮೀ ಸದಾನಂದ ಸರಸ್ವತೀ ವಿದ್ಯಾಲಯದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Highslide for Wordpress Plugin