ಅನಂತಶ್ರೀ ಗೋಶಾಲೆ, ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗೋದಿನ ಆಚರಣೆ

ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆ ಗೋಸ್ವರ್ಗದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಗೋದಿನವನ್ನು ಆಯೋಜಿಸಲಾಗುತ್ತಿದ್ದು, ಅದೇ ವೇಳೆ ಶ್ರೀ ಮಠದ ಮತ್ತೊಂದು ಅಂಗಸಂಸ್ಥೆಯಾದ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಅನಂತಶ್ರೀ ಗೋಶಾಲೆಯಲ್ಲಿಯೂ ಗೋದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಗೋದಿನಕ್ಕೆ ಸಂಭ್ರಮದಿಂದ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳು ಬೋಧಕ ಬೋಧಕೇತರ ವೃಂದದವರು ಗೋಶಾಲೆಗೆ ಬಂದು ಗೋ ಆರತಿ ಎತ್ತಿದರು. ಸಂಭ್ರಮಿಸಿದರು. ಗೋಪಾಲಕ ಸತೀಶ ಶಾಸ್ತ್ರಿ ಅವರು ದೇಸೀ ಗೋವುಗಳ ಬಗೆಗೆ ಮಾಹಿತಿ ನೀಡಿದರು.

ದಿನಾಂಕ 13-1-2024ರಿಂದ 16-1-2024ರವರೆಗೆ ಸಮಯ ಬೆಳಗ್ಗೆ ಗಂಟೆ 7.30ರಿಂದ 11 ಗಂಟೆವರೆಗೆ ಮತ್ತು ಸಂಜೆ ಗಂಟೆ 5.00ರಿಂದ 6.30ರವರೆಗೆ ಗೋದಿನ ಆಚರಣೆ ನಡೆಯಿತು.

Highslide for Wordpress Plugin