ಶಿಕ್ಷಕ ರಕ್ಷಕ ಸಂಘ

ದಿನಾಂಕ 11-08-2012ರಂದು ಶ್ರೀ ಭಾರತೀ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರಿ ಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ವೈ.ವಿ ಭಟ್ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎನ್. ಭಟ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕ ರಕ್ಷಕ ಸಂಘದ ಅವಶ್ಯಕತೆಯನ್ನು ವಿವರಿಸಿದರು. ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಅಧ್ಯಕ್ಷರು: ಬಿ.ಎಮ್.ಎಮ್ ಅಡಿಗ
ಸದಸ್ಯರು:
೧. ಉಮೇಶ ಚೇವಾರು
೨. ಕೀರ್ತಿ ಶೆಣೈ
೩. ವಿಷ್ಣು ಮಯ್ಯ
ಕುಮಾರಿ ಪ್ರಿಯಾ ಮತ್ತು ಕುಮಾರಿ ಹೇಮಲತಾ ಇವರ ಪ್ರಾರ್ಥನೆಯ ಮೂಲಕ ಸಭಾ ಕಾರ್ಯಕ್ರಮ ಆರಂಭವಾಯಿತು.  ಡಾ. ಈಶ್ವರ ಪ್ರಸಾದ ಇವರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಶ್ರೀಮತಿ ಉಷಾ ಇವರು ವಂದಿಸಿದರು. ಶ್ರೀಮತಿ ಭಾರತೀ ನೀಲಕಂಠ ಇವರು ಕಾರ್ಯಕ್ರಮ ನಿರ್ವಹಿಸಿದರು.

Highslide for Wordpress Plugin