ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಎನ್.ಎಸ್.ಎಸ್. ಪ್ರಾಯೋಜಕತ್ವದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.  ಖ್ಯಾತ ವೈದ್ಯರಾದ ಡಾ. ಭೀಮ್ ಭಟ್‌ರವರು ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆಗೆ ಚಾಲನೆಯಿತ್ತರು.

ನಗರದ ಹಲವಾರು ತಜ್ಞ ವೈದ್ಯರುಗಳು ಈ ಶಿಬಿರದಲ್ಲಿ ಪಾಲ್ಗೊಂಡು ನರ್ಸರಿಯಿಂದ ಪದವಿ ತರಗತಿಯವರೆಗಿನ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ನಡೆಸಿದರು. ಈ ಶಿಬಿರವು ಕಣ್ಣು, ಹಲ್ಲು, ಚರ್ಮದ ತಪಾಸಣೆ, ಹಾಗೂ ಇತರ ವೈದ್ಯಕೀಯ ತಪಾಸಣೆಗಳನ್ನೊಳಗೊಂಡಿತ್ತು.  ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.

‘ವಾಸನ್ ಐ ಕೇರ್‌ನ’ ವೈದ್ಯ ತಂಡ ಹಾಗೂ ಎ.ಬಿ.ಶೆಟ್ಟಿ ಮೆಡಿಕಲ್ ಕಾಲೇಜ್ ವೈದ್ಯರುಗಳ ಆಗಮನ ವಿಶೇಷ ಮಹತ್ವ ನೀಡಿತ್ತು.  ಪದವಿ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು. ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಶಿಬಿರವು ಮಧ್ಯಾಹ್ನ ೧ ಗಂಟೆಗೆ ಸಮಾಪ್ತವಾಯಿತು.  ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯಿತು.

Highslide for Wordpress Plugin